ವರದಿ..ನಬಿರಸೂಲ್ ಎಮ್ ನದಾಫ್
* ಶಹಾಪುರ ತಾಲೂಕಿನ ಚನ್ನೂರು (ಕೆ) ಗ್ರಾಮದಲ್ಲಿ ದಿನಾಂಕ 4/07/2024 ರಂದು ಗುರುವಾರ ಬೆಳಗಿನ ಜಾವ 6:30 ಕ್ಕೆ ಭವ್ಯ ಮೆರವಣಿಗೆ ಕುಂಭ ಮತ್ತು ಕಳಸ ಮಹಾ ಗಂಗಸ್ಥಳ, ಸಾಯಂಕಾಲ 4 ಗಂಟೆಗೆ ಶ್ರೀಮಠದ ಗೋಪುರಕ್ಕೆ ಕಳಸಾರೋಹಣ.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಷ.ಬ್ರ.ಶ್ರೀ ಡಾ. ವಿಶ್ವರಾಧ್ಯ ಶಿವಾಚಾರ್ಯರು ಬ್ರಹನ್ ಮಠ ಮಗನಗೇರಿ ಮತ್ತು ಷ.ಬ್ರ. ಶ್ರೀ ಸೂಗುರೇಶ್ವರ ಶಿವಾಚಾರ್ಯ ನಗನೂರು ಹಿರೇಮಠ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ನೂತನ ಗೋಪುರ ಲೋಕಾರ್ಪಣೆ ಮತ್ತು ಶ್ರೀ ರೇವಣಸಿದ್ದೇಶ್ವರ ಮಹಾಶರಣರ ದಿನಾಂಕ 5/7/2024 63 ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ನೆರವೇರುವುದು.
ಮಣ್ಣೆತ್ತಿನ ಅಮಾವಾಸ್ಯೆ ದಂದು ಶುಕ್ರವಾರ ಸಾಯಂಕಾಲ ಭಜನೆ ಮತ್ತು ಇಡೀ ಸಂಜೆ ಜಾಗರಣೆ. ಮಾರನೇ ದಿನ ದಿನಾಂಕ 6/07/2024 ಶನಿವಾರ ಬಂದತ್ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಹಾಪ್ರಸಾದ ಕಾರ್ಯಕ್ರಮ ನೆರವೇರುವುದು ದಿನವಿಡೀ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಗಳು ಸಂಪೂರ್ಣ ಮಾಹಿತಿ ನೀಡಿದರು.