ಭಾವೈಕ್ಯತೆಯ ರಂಜಾನ್ ಇಫ್ತಾರ ಕೂಟ

YDL NEWS
1 Min Read

ಕೆಂಭಾವಿ ಪಟ್ಟಣ ಸಮೀಪದ ಏವೂರ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು

ತಿಂಗಳುಗಳ ಕಾಲ ನಡೆಯುವ ಉಪವಾಸ ವೃತದ ಹಿನ್ನೆಲೆಯಲ್ಲಿ ಕೆಂಭಾವಿ ಪಟ್ಟಣ ಸಮೀಪದ ಏವೂರ ಜುಮ್ಮ ಮಸೀದಿ ಆವರಣದಲ್ಲಿ ಹಿಂದೂ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ ಕೂಟವನ್ನ ಆಯೋಜನೆ ಮಾಡಲಾಗಿತ್ತು. ಹಿಂದೂ ಮತ್ತು ಮುಸ್ಲಿಂ ಧರ್ಮದ ಬಾಂಧವರಿಗೆಲ್ಲ ಪ್ರೀತಿಯ ಆತ್ಮೀಯ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಕೆಂಭಾವಿ ಪಟ್ಟಣ ಸಮೀಪದ ಏವೂರ (ಸುಭಾಷ್ ಗೌಡ ದಳಪತಿ) ಇಪ್ತಿಯರ್ ಕೂಟ ನಿರ್ವಹಿಸಿದ್ದರು. ಹಿಂದೂ ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಒಬ್ಬರಿಗೊಬ್ಬರು ತಿನಿಸುತ್ತಾ ಇಪ್ತಿರ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆಯನ್ನ ಮೆರೆದರು.ನಂತರ ಮಕ್ಕಾ ಮಸೀದಿ ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಪ್ರಾರ್ಥನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಏವೂರ ಮುಖಂಡ ಸುಭಾಷ್ ಗೌಡ ದಳಪತಿ , ಶರಣಗೌಡ ಕರ್ನಾಳ್ , ಶರಣಪ್ಪ ಬಡಿಗೇರ್ , ಜಟ್ಟಪ್ಪ ಹೊಸ್ಮನಿ , ಶಂಕರಗೌಡ ಕೊಂಕಲ್ , ಪರಶುರಾಮ್ ಟಣಕೆದಾರ್ , ನಾಗೇಶ್ ಬೂದಿಹಾಳ, ಬಂದೇ ನವಾಜ್ ವನದುರ್ಗ, ರಾಜಸಾಬ ಗೌಂಡಿ, ಅಬ್ದುಲ್ ಘನಿ ಸಂತಿ, ಮೆಹಬೂಬ್ ಸಾಬ್ ಟೇಲರ್ , ಏವೂರ ಗ್ರಾಮದ ಇತರರು ಇದ್ದರು.

Share This Article