ಕೊಡೇಕಲ್: ಇದೇ 18,19,20ರಂದು ವಿಜಯಪುರ ನಗರದಲ್ಲಿ “ವಿಜಯಪುರ ಉತ್ಸವ 2025”. ಆಮಂತ್ರಣ ಬಿಡುಗಡೆ.ನಾರಾಯಣಪುರ ಸಮೀಪದ ಕೊಡೇಕಲ್ ಕಾಲಜ್ಞಾನಿ ಮಂದಿರ ಆವರಣದಲ್ಲಿ ಉತ್ತರ ಕರ್ನಾಟಕ ಶಾಮಿಯಾನ, ಲೈಟಿಂಗ್, ಡೆಕೋರೇಶನ್, ಧ್ವನಿವರ್ಧಕ, ಮಾಲಿಕರ ಕ್ಷೇಮಾಭಿವೃದ್ದಿ ಸಂಘದಿಂದ ವಿಜಯಪುರದಲ್ಲಿ ನಡೆಯುವ “ವಿಜಯಪುರ ಉತ್ಸವ 2025”ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ತಾಲೂಕಾ ಘಟಕ.
ಕೊಡೇಕಲ್: ಪಟ್ಟಣದ ಕಾಲಜ್ಞಾನಿ ಬಸವೇಶ್ವರ ಮಂದಿರ ಆವರಣದಲ್ಲಿ ಇದೇ ಜುಲೈ 18ರಿಂದ 20ರವರೆಗೆ ವಿಜಯಪುರ ನಗರದಲ್ಲಿ ನಡೆಯುವ “ವಿಜಯಪುರ ಉತ್ಸವ 2025”ರ 4ನೇ ಮಹಾ ಅಧಿವೇಶನದ. ಆಮಂತ್ರಣ ಪತ್ರಿಕೆಯನ್ನು ಉತ್ತರ ಉತ್ತರ ಕರ್ನಾಟಕ ಶಾಮಿಯಾನ, ಲೈಟಿಂಗ್, ಡೆಕೋರೇಶನ್, ಧ್ವನಿವರ್ಧಕ, ಮಾಲಿಕರ ಕ್ಷೇಮಾಭಿವೃದ್ದಿ ಸಂಘಟನೆ ಪರವಾಗಿ ತಾಲೂಕಾ ಘಟಕದಿಂದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ತಾಲೂಕಾ ಘಟಕದ ಅಧ್ಯಕ್ಷ ಶೇಕ್ ಅಹ್ಮದ ನಾರಾಯಣಪುರ ವಿಜಯಪುರ ನಗರದಲ್ಲಿ ನಡೆಯುವ ಸದರಿ ಉತ್ಸವದಲ್ಲಿ ಪಾಲ್ಗೊಂಡು ಶಿಸ್ತು ಬದ್ದತೆಯೊಮದಿಗೆ ಸಮಾವೇಶವನ್ನು ಯಶಸ್ವಿಗೊಳಿಸಲು ವಿನಂತಿಸಿದರು.
ಗುರು ನಾರಾಯಣಪುರ, ಬಸವರಾಜ ಮೇಸ್ತಾಕ, ವೆಂಕಟೇಶ ಹುಣಸಗಿ, ಧೀರುನಾಯಕ, ಕೊಡೇಕಲ್ದ ಸೋಮಪ್ಪ, ಪರಶು ಬರದೇವನಾಳ, ಶಿವು, ಸೋಮಣ್ಣ, ಶಂಕರ ಧನ್ನೂರ, ತಿರುಪತಿ, ಶಿವು, ಅಯ್ಯಪ್ಪ, ಬಸಪ್ಪ, ಇತರರಿದ್ದರು.