ಕಡದರಾಳ: ನೂತನ ಶಿಶು ಪಾಲನಾ ಕೇಂದ್ರ ಕಟ್ಟಡ ಲೋಕಾರ್ಪಣೆ.
ನಾರಾಯಣಪುರ : ಸಮೀಪದ ಬೈಲಕುಂಟಿ ಗ್ರಾ.ಪಂ. ವ್ಯಾಪ್ತಿಯ ಕಡದರಾಳ ಗ್ರಾಮದಲ್ಲಿ ಮಂಗಳವಾರ ನೂತನ ‘ಶಿಶು ಪಾಲನಾ ಕೇಂದ್ರ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಬೈ. ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಯಲ್ಲಮ್ಮ ಎನ್ ಮಾಲಿಪಾಟೀಲ್ ಚಾಲನೆಗೊಳಿಸಿ ಗ್ರಾಮದ ಮಕ್ಕಳಿಗೆ ಸದರಿ ಕೇಂದ್ರವು ಸಕಾರಾತ್ಮಕವಾಗಿ ಅಭಿವೃದ್ದಿ ಪಥದಲ್ಲಿ ಆರೋಗ್ಯಯುತ ಬದ್ದತೆಯೊಂದಿಗೆ ಪಂ. ವ್ಯಾಪ್ತಿಯಲ್ಲಿ ಮಾದರಿ ಕೇಂದ್ರವಾಗಿ ಗುರುತಿಸಿಕೊಳ್ಳಲಿ ಎಂದು ಹೇಳಿದರು.
ಪಿಡಿಒ ಸೋಮಶೇಖರ ಶಿವಶಿಂಪಿ, ಕರವಸೂಲಿಗರರಾದ ಬಸನಗೌಡ ಎಮ್, ದುರ್ಗಪ್ಪ ನಾರಾಯಣಪುರ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಸಿದ್ದಮ್ಮ, ಪ್ರೇಮಾ, ಗ್ರಾಮ ಕೂಲಿ ಮಿತ್ರೆ ಶ್ರೀಮತಿ ರೇಣುಕಾ ಆದಪ್ಪ ತೋಳದೊನ್ನಿ ಪಾಲನಾ ಕೇಂದ್ರದ ಮೇಲ್ವಿಚಾರಕಿ ಸಂಗೀತಾ ಇತರರಿದ್ದರು.