ಭೀಮೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಸಿದ ಉಪವಾಸ ಸತ್ಯಾಗ್ರಹ ಅಂತ್ಯ

KTN Admin
1 Min Read

ಅಫಜಲಪುರ ಮಾ 28 : ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕಳೆದ 12 ದಿನಗಳಿಂದ. ಹೋರಾಟಗಾರ ಶಿವಕುಮಾರ ನಾಟಿಕಾರ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.ತಾಲೂಕಿನ ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರು ಹರಿಸಲು ಸರ್ಕಾರ ಸೂಚನೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿದೆ ಎಂದು ಹೋರಾಟಗಾರ ಶಿವಕುಮಾರ ನಾಟಿಕಾರ ಹೇಳಿದರು.ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಗೆ ಭೇಟಿ ನೀಡಿ ಭೀಮಾ ನದಿಯಲ್ಲಿ ಸ್ನಾನ ಪೂಜಾದಿಗಳನ್ನು ಮುಗಿಸಿ ಭೀಮಾ ನದಿ ನೀರು ಸೇವಿಸಿ ಮಾತನಾಡಿ.ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಆದರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪಕ್ಷಾತೀತವಾಗಿ ಹೋರಾಟ ನಡೆಸಿ ಭೀಮಾ ನದಿ ಉಳಿವಿಗಾಗಿ ಹೋರಾಟ ನಡೆಸಲಾಗಿದೆ. ವೈಯಕ್ತಿಕ ಹಿತದೃಷ್ಟಿಯಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿಲ್ಲ.ಎಂದು ಹೇಳಿದರು 

ಈ ಸಂದರ್ಭದಲ್ಲಿ ಮರುಳರಾಧ್ಯ ಶಿವಾಚಾರ್ಯರು ಚಿದಾನಂದ ಮಠ ಮಲ್ಲಿಕಾರ್ಜುನ ಸಿಂಗೆ ರಾಜಕುಮಾರ ಉಕ್ಕಲಿ ಶ್ರೀಕಾಂತ ದಿವಾಣಜಿ ಮಲ್ಲಿಕಾರ್ಜುನ ಪೂಜಾರಿ ಅಮೋಲ ಮೋರೆ ಬಸಣ್ಣ ಜಕಾಪೂರ ಮಹಾಂತಗೌಡ ಪಾಟೀಲ ಸಿದ್ದುಗೌಡ ಹವಳಗಾ
ಸಿದ್ರಾಮ ಚಿಕ್ಕಮಣೂರ ಮಲಕಣ್ಣ ಹೊಸೂರಕರ ಅಪ್ಪಾಸಾಬ ಹೊಸೂರಕರ ಭಗವಂತ ಜಮಾದಾರ ಚಂದ್ರಕಾಂತ ದೈತನ ಹಣಮಂತ ನಾವಾಡಿ ಶಾಮರಾಯಗೌಡ ಪಾಟೀಲ ಲಾಡ್ಲೇಮಶಾಕ ಗೌರ ಸಂತೋಷ ಗೋಪಗೊಂಡ ಬಸವರಾಜ ಜನ್ನಾ ಸಂಜೀವಕುಮಾರ ನನ್ನಾಜಿ ಶರಣಪ್ಪ ಸುತಾರ ಸತೀಷ ಬುಸಿ ಪ್ರಭಾವತಿ ಮೇತ್ರೆ ಪ್ರತಿಭಾ ಮಹಿಂದ್ರಕರ ದಶರಥ ನಾವಾಡಿ ಸಿದ್ದಾರಾಮ ಬದನಿಕಾಯಿ ಮಲ್ಲಿಕಾರ್ಜುನ ಪೂಜಾರಿ ಶಿವಪುತ್ರ ನಾವಾಡಿ ಅವ್ವಣ್ಣ ಲಾಳಸಂಗಿ ಅಂಬಣ್ಣ ತಳವಾರ ಮಹಾಂತಪ್ಪ ಹಡಪದ ಸೇರಿದಂತೆ ಇತರರಿದ್ದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ