ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಸೆ.11ರಂದು ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸುತ್ತಿದ್ದು ಇದರ ಬಿಸಿ ಜನಸಾಮಾನ್ಯರ ಮೇಲೆ ತಟ್ಟಲಿದೆ. ರಾಜ್ಯದ ಬಹುತೇಕ ಕಡಿಮೆ ದೂರದ ಸಿವಿಲ್ (ಖಾಸಗಿ ) ಬಸ್ಗಳು ಸಂಪೂರ್ಣ ಸ್ಥಬ್ಧವಾಗಲಿದ್ದು ಇದರ ಜೊತೆಗೆ ಆಟೋ,ಶಾಲಾ ವಾಹನ ,ಕ್ಯಾಬ್ಗಳು ,ಮಿನಿ ಬಸ್ ,ಜೊತೆಗೆ ಕೆಲ ಸರಕು ಸಾಗಣೆ ವಾಹನಗಳು ಕೂಡ ನಿಂತಲ್ಲೇ ನಿಲ್ಲಲಿದೆ.