ಲಿಂಗಸಗೂರು:ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಎಂ ಎಲ್ ಸಿ ಬಯ್ಯಾಪುರಗೆ ಕೆಲವರು ಪ್ರಶ್ನೆ ಮಾಡುತ್ತಲೆ ವಾದ ವಿವಾದಗಳಾಗಿ ಎಂ ಎಲ್ ಸಿಯವರ ಕಾರುಗಟ್ಟಿದ ಘಟನೆ ಜರುಗಿದೆ
ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಲು ಕಾಂಗ್ರೆಸ್ ಪಕ್ಷದ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ಅವರ ತಂಡ ಹೋದಾಗ ಕಾರ್ಯಕ್ರಮ ಮುಗಿದ ನಂತರ ಹೂಲಿಗೇರಿ ಕಾಂಗ್ರೆಸ್ ಬಣದ ಕೆಲವರು ಎಂ ಎಲ್ ಸಿ ಯವರನ್ನು ಕೆಲಪ್ರಶ್ನೆ ಕೇಳಬೇಕು ಈಚೆ ಕಳಿಸಿ ಎಂದಾಗ ಕೆಲವರು ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ ಆದರೆ ಕೆಲವರು ಯಾರ ಮಾತು ಕೇಳದೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಅಲ್ಲದೆ ಕೆಲವರು ಎಂ ಎಲ್ ಸಿ ಯವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು ಎರಡು ತಂಡಗಳು ಠಾಣೆಮೆಟ್ಟಲು ಏರುವ ಲಕ್ಷಣಗಳು ಕಂಡುಬರುತ್ತದೆ